ಸೀತೆಯನ್ನು ಉದ್ದೇಶಿಸಿ ಅನುನಯದಿಂದ ಮಾತನಾಡುವ ರಾವಣ ಅವಳನ್ನು ಸಂಬೋಧಿಸುವ ರೀತಿ: ಹೇ, ವ್ಯರ್ಥ ದುಃಖಾರ್ಥೆ, ಇನ್ನೆಲ್ಲಿ ನಿನಗೆ ರಾಮನ ವಾರ್ತೆ?..... ಶಬ್ದಾಲಂಕಾರ ಸಹಿತವಾದ ವಾಕ್ಯಗಳನ್ನು ನೂರರ ಲೆಕ್ಕದಲ್ಲಿ ಪಟ್ಟಿ ಮಾಡಬಹುದು, ಶ್ರೀರಾಮಾಯಣ ದರ್ಶನಂ ಕಾವ್ಯದಲ್ಲಿ! ***
ಸೀತೆಯ ಪ್ರಭಾವಕ್ಕೊಳಗಾದ ತಂಗಿ ಚಂದ್ರನಖಿಯೂ ರಾವಣನಿಗೆ ಬುದ್ಧಿವಾದ
ಹೇಳುವಷ್ಟರಮಟ್ಟಿಗೆ ಧೈರ್ಯವಹಿಸುತ್ತಾಳೆ. ರಾವಣ ಕೆರಳುತ್ತಾನೆ, ಒಳಗೊಳಗೆ
ಬೆವರುತ್ತಾನೆ! ಮೇಲ್ಮೇಲೆ ಬೆದರಿಸುತ್ತಾನೆ!! ನೀನಾದೊಡಂ,
ಅಶೋಕವನದಲ್ಲಿ ಆಂಜನೇಯ ಹುಡುಕುತ್ತಿದ್ದ, ಸೀತೆಯನ್ನಿಟ್ಟಿದ್ದ ಎಲೆವನೆ ಹೇಗಿತ್ತು? ಎಲ್ಲ ಚೆಲ್ವಿಂಗೆ ಮುಡಿಯಾಗಿ, ಮರುತಜನ ಕಣ್ಗುರಿಗೆ ಗುಡಿಯಾಗಿ, ಕಡಲ ನೀರ್ನಡೆಗೆ ನಿಲ್’ಗಡಿಯಾಗಿ, ಮಾರುತಿಯ ನಿಃಶ್ರೇಯಕೊಂದು ಮುನ್ನುಡಿಯಾಗಿ ಕುಳ್ತುದು ಎಲೆವನೆವಕ್ಕಿ, ತನ್ನ ಬೆಚ್ಚನೆ ಗರಿಯ ರೆಕ್ಕೆತಿಪ್ಪುಳೊಳಿಕ್ಕಿ ರಕ್ಷಿಪ್ಪವೋಲ್ ದುಃಖಿ ಭೂಜಾತೆಯಂ! ದುಃಖಿತಳಾಗಿರುವ ಸೀತೆಯನ್ನು, ತನ್ನ ಗರಿಯ ತಿಪ್ಪುಳೊಳಗೆ ಹುದುಗಿಸಿಕೊಂಡು ರಕ್ಷಿಸುತ್ತಿರುವ ಹಕ್ಕಿಯಂತೆ ಎಲೆವನೆ ಕಾಣುತ್ತಿತ್ತಂತೆ! *
ಎಲೆವನೆಯಿಂದ
[ಚಂದನ್ ಎಂಬುವವರ ಕುಟುಂಬದ ದುರಂತ ಅಂತ್ಯದ ಹಿನ್ನೆಲೆಯಲ್ಲಿ]
ಮೂಲ ವಾಲ್ಮಿಕಿ ರಾಮಾಯಣದಲ್ಲಿ ಕಬಂಧ ಎಂಬ ರಾಕ್ಷಸನ್ನು, ಸೀತೆಯನ್ನು ಕಳೆದುಕೊಂಡು ದುಃಖದಲ್ಲಿದ್ದ ರಾಮ-ಲಕ್ಷ್ಮಣರು ವಧಿಸುವ ಕಥೆ ಬರುತ್ತದೆ. ಅದರಲ್ಲಿ ಕಬಂಧನೊಡನೆ ನೇರ ಹೋರಾಟಕ್ಕಿಳದ ರಾಮಲಕ್ಷ್ಮಣರ ಕೈ ಸೋಲಾಗುತ್ತಾ ಸಾಗುತ್ತದೆ. ಆಗ, ರಾಮ, ಲಕ್ಷ್ಮಣನಿಗೆ ‘ನನ್ನ ಕಥೆ ಮುಗಿಯಿತು. ನೀನಾನಾದರು ತಪ್ಪಿಸಿಕೊಂಡು ಹೋಗು. ಅಯೋಧ್ಯೆಗೆ ವಿಷಯ ತಿಳಿಸು’ ಎಂದು ನಿರಾಶೆಯಿಂದ ನುಡಿಯುತ್ತಾನೆ. ಆದರೆ, ಲಕ್ಷ್ಮಣನ ಸಂದರ್ಭೋಚಿತ
(ತನ್ನನ್ನು ಹುಡುಕಿ ಬಂದ ಲಕ್ಷ್ಮಣ ಕಣ್ಣಿಗೆ ಬಿದ್ದ ತಕ್ಷಣ)
ರಾಮ: ಓ ಲಕ್ಷ್ಮಣಾ. ಕೇಡಾಯ್ತಲಾ! ದೇವಿಯೊರ್ವಳಂ ಬಿಟ್ಟೇಕೆ ಬಂದೆ?
ಕೊರಳಂ ಕೊಯ್ದೆ! ಹಾ ಕೊಂದೆ ನೀ ಕೊಂದೆ!
ಪಿಂತಿರುಗು; ನಡೆ ಬೇಗಮೆಲೆವನೆಗೆ!
ಶಿವ ಶಿವಾ ಸೂರೆವೋದೆವೊ ನಾಂ ನಿಶಾಚರರ ಕೈತವಕೆ!
(ಲಕ್ಷ್ಮಣನೊಂದಿಗೆ ಪರ್ಣಕುಟಿಯಿದ್ದೆಡೆಗೆ ನಡೆಯುತ್ತಲೇ)
ಲಕ್ಷ್ಮಣ: ಕೂಗಿದುದು ನೀನಲ್ತೆ?
ರಾಮ: ಸತ್ತನ್ ಆ ರಾಕ್ಷಸಂ!
ಲಕ್ಷ್ಮಣ: ಅದು ನಿಶಾಚರ ಮಾಯೆ ಎಂದು ನಾನೆಂತೆಂತು ಪೇಳ್ದೊಡಂ.
ಕವಿ-ಕಾವ್ಯಕರ್ಮಗಳನ್ನೇ ಬಳಸಿ ಅಲಂಕಾರ ಸೃಜಿಸುವುದಕ್ಕೆ ಇನ್ನೊಂದು ಉಪಮಾಲಂಕಾರ ಸಾಕ್ಷಿಯದಗಿಸುತ್ತಿದೆ ಇಲ್ಲಿ: “ನಾಗರಿಕ ನಗರಂ ಮಹಾಕವಿಯನೋಲೈಸಿ ಮನ್ನಣೆಯನೀವಂತೆವೋಲ್”
ನಾಟಕಗಳಲ್ಲಿ ಕಾವ್ಯ ನಾಟಕಗಳದ್ದೇ ಒಂದು ಪ್ರಕಾರವುಂಟು. ಆದರೆ ಮಹಾಕಾವ್ಯದಳೊಗೆ ಅದರಲ್ಲೂ ವರ್ಣಕದೊಳಗೆ ನಾಟಕಗಳಿರುವುದು, ಕಾವ್ಯವನ್ನೇ ನಾಟಕೀಯಗೊಳಿಸುವುದು, ಹೆಚ್ಚು ಹೆಚ್ಚು ಸಂಭಾಷಣೆಯನ್ನಡಕಗೊಳಿಸುವುದು ಸ್ವಲ್ಪ ಕಷ್ಟ ಸಾಧ್ಯ. ಮೊದಲಿಗೆ ಛಂದಸ್ಸು, ಪಾದಗಳ ಮಿತಿ, ಕ್ರಿಯಾಪದ ನಾಮಪದಗಳ ಬಳಕೆಯಲ್ಲಿ ಆಗುವ ಗೊಂದಲ
Comment Wall (1 comment)
You need to be a member of LIS Links to add comments!
Join LIS Links